ಚಳಿಗಾಲ ಬಂದಾಗ ಎಷ್ಟು ಚಳಿ ಎಂದಳು
ಬಂತಲ್ಲ ಬೇಸಿಗೆ ಕೆಟ್ಟ ಬಿಸಿಲ್ ಎಂದಳು
ಬಿತ್ತೋ ಮಳೆ ಬಿಡದಲ್ಲ ಶನಿ ಎಂಬ ಟೀಕೆ
ಇವಳು ಮೆಚ್ಚುವ ವಸ್ತು ಇಲ್ಲಿಲ ಜೋಕೆ
ಬೇಕಂತೆ ಇವಳಿಗೆ ಕಾವೇರಿದ ಕಾವೇರಿ
ಇಲ್ಲಿ ಕುಡಿಯೋಕು ಇಲ್ಲದೆ ನಾವೇನ್ರಿ
ಅತ್ತ ಮಹದಾಯಿ ಇತ್ತ ಕಾವೇರಿ
ಪ್ರತಿದಿನ ಸಂಘರ್ಷದ ಗೋಳು
ಕೇಳೋರು ಇಲ್ಲದ ಕರುನಾಡ ಅಳಲು
ಹೋಗ್ತಾಳೆ ಕೋರ್ಟ್ಗೆ ಪದೇ ಪದೇ
ಅಲ್ಲಿ ಕರ್ನಾಟಕ ಸೋಲೋದು ಇದ್ದದೆ
ನ್ಯಾಯಾಲಯ ಮಾಡಿತು ಆದೇಶ
ಇಲ್ಲಿ ನೀರನ್ನು ಬಿಟ್ಟ ನಿದ್ದೇಶ
#ನಮ್ಮ ಕಾವೇರಿ
No comments:
Post a Comment